March 28, 2019

ಆಭರಣ



ಒಲವ ಮಲ್ಲಿಗೆ ಮುಡಿದು 
ಬಳಿಗೆ ಬಂದಿಹ ಸತಿಯ 
ಕೇಳಿದನು ಪತಿಯು  ಬರಸೆಳೆದು ತೋಳಿನಲಿ 

ನಾಚಿಕೆಯ ಆಭರಣ 
ತೊಟ್ಟು ಬಂದಿಹೆಯೇಕೆ 
ತುಂಟತನ ಬೇಕಾದ ಸಮಯದಲ್ಲಿ 

ನಿಂತಲ್ಲೇ ನೀರಾಗಿ ಕರಗಿ 
ಹೇಳಿದಳವಳು ನೀವಿರುವಿರಲ್ಲ 
ನಾಚಿಕೆಯ ಕಳೆದಿಡಲು 

ಏನಾದರೂ ತೊಡುಗೆ 
ಬೇಕಿಲ್ಲವೇ ನಿಮಗೆ   
ಶೃಂಗಾರ ಸಮಯದಲ್ಲಿ ಸರಿಸಿ ಬದಿಗಿಡಲು !

2 comments:

sunaath said...

‘ಏನಾದರೂ ತೊಡುಗೆ
ಬೇಕಿಲ್ಲವೇ ನಿಮಗೆ
ಶೃಂಗಾರ ಸಮಯದಲ್ಲಿ ಸರಿಸಿ ಬದಿಗಿಡಲು !’
ತುಂಟ, ಜಾಣ ಉತ್ತರ!

ಕಂದ said...

ನೈಸ್